
ಇದೇ ಬುಧವಾರ (12/02/25)ರ ಸಂಜೆ 5.30 ಕ್ಕೆ ಕರ್ನಾಟಕ ಸಂಘ, ಶಿವಮೊಗ್ಗದಲ್ಲೊಂದು ಮಹತ್ತರವಾದ ಕಾರ್ಯಕ್ರಮ ನಡೆಯಲಿದ್ದು.
ತಿಂಗಳ ಅತಿಥಿ ಕಾರ್ಯಕ್ರಮ ಮಾಲಿಕೆಯಲ್ಲಿ “ವಿದ್ವತ್ ಲೋಕದ ವಿಸ್ಮಯ” ಎಂದೇ ಖ್ಯಾತರಾಗಿರುವ ಶತಾವಧಾನಿ ಡಾ. ಆರ್ . ಗಣೇಶ್ ಅವರು ತಮ್ಮ ಮಾನಸಿಕ ಗುರು ಹಾಗು ಕನ್ನಡ ನಾಡು ಕಂಡ ದಾರ್ಶನಿಕ ಸಾಹಿತಿ ಡಿ. ವಿ. ಗುಂಡಪ್ಪನವರ ಮೇರು ಕೃತಿಗಳಲ್ಲಿ ಒಂದಾದ “ಜ್ಞಾಪಕ ಚಿತ್ರ ಶಾಲೆ”ಯ ಕುರಿತು ಉಪನ್ಯಾಸ ನೀಡಲಿದ್ದಾರೆ .
ಅತ್ಯಂತ ವಿದ್ವತ್ಪೂರ್ಣವಾದ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಅಂದಗಾಣಿಸಬೇಕೆಂದು ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಕೋರಿದ್ದಾರೆ.