
ಇಂದು ದಿನಾಂಕ 01.03.2025 ರ ಶನಿವಾರ ಬೆಳಿಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಸಮಿತಿ ರಾಜ್ಯ ಪ್ರಮುಖರು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ. ಶಿವಯೋಗಿ ಸ್ವಾಮಿಯವರು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಸಂಪರ್ಕ ಹೊಂದ್ದಿದ್ದ ಮಾಜಿ ಸಭಾಪತಿಗಳಾದ ಡಿ. ಹೆಚ್. ಶಂಕರ್ ಮೂರ್ತಿ ಹಾಗೂ ಪರಿವಾರದ ಪ್ರಮುಖರಾದ ಡಿ. ಹೆಚ್. ಸುಬ್ಬಣ್ಣ, ಪಟ್ಟಾಭಿರಾಮ್ ರವರ ಮನೆಗಳಲ್ಲಿ ಭೇಟಿ ಮಾಡಿದರು. ಆಗ ಅವರು ತಮ್ಮ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಘಟನೆಗಳ ಮೆಲುಕು ಹಾಕಿದರು.
ಸಮಿತಿಯ ಶಿವಮೊಗ್ಗ ಜಿಲ್ಲಾ ಪ್ರಭಾರಿಯವರು ಹಾಗೂ ರಾಜ್ಯ ಕಾರ್ಯದರ್ಶಿ ಯಾದ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡರವರು, ಶಿವಮೊಗ್ಗ ನಗರ ಶಾಸಕರಾದ ಎಸ್. ಎನ್. ಚನ್ನಬಸಪ್ಪರವರು,ಜಿಲ್ಲಾ ಅಧ್ಯಕ್ಷರಾದ ಎನ್.ಕೆ. ಜಗದೀಶರವರು ವಿಧಾನಪರಿಷತ್ ಮಾಜಿ ಶಾಸಕರಾದ ಆರ್.ಕೆ. ಸಿದ್ದರಾಮಣ್ಣ,ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ,ರಾಜ್ಯ ಕ್ರೀಡಾ ಪ್ರಾಧಿಕಾರ ಮಾಜಿ ಉಪಾಧ್ಯಕ್ಷರಾದ ಗಿರೀಶ್ ಪಟೇಲ್, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಸಿ. ಹೆಚ್. ಶತಮಾನೋತ್ಸವದ ಜಿಲ್ಲಾ ಪ್ರಮುಖರಾದ ,ಶ್ರೀಮತಿ ಸುರೇಖಾ ಮುರಳಿಧರ್,ಚೇತನ್. ಎಸ್., ಚಂದ್ರಶೇಖರ್ ಜಿಲ್ಲಾ ಪ್ರಮುಖರಾದ ಜ್ಞಾನೇಶ್ವರ್, ಎನ್.ಜೆ. ನಾಗರಾಜ್ , ಜಿಲ್ಲಾ ಮಾಧ್ಯಮ ಪ್ರಮುಖರಾದ ಕೆ. ವಿ. ಅಣ್ಣಪ್ಪ ಹಾಗೂ ಶರತ್ ಕಲ್ಯಾಣಿ, ಶ್ರೀ ನಾಗ್, ಉಪಸ್ಥಿತರಿದ್ದರು.
